?ಮೇಸ್ತ್ರಿ? ಗೆ ?ದರ್ಶನ? ಭಾಗ್ಯ
Posted date: 22/March/2011

ಚಾಲೆಂಜಿಂಗ್ ಸ್ಟಾರ್ ದರ್ಶನ್ ’ಮೇಸ್ತ್ರಿ’ ಚಿತ್ರದಲ್ಲಿ ಸ್ನೇಹಪೂರ್ವಕವಾಗಿ ಒಂದು ಸಾಹಸ ಸನ್ನಿವೇಶ ಹಾಗೂ ಒಂದು ತಿರುವು ನೀಡುವಂತ ಸನ್ನಿವೇಶದಲ್ಲಿ ಭಾಗವಹಿಸುವರು ಎಂದು ಹೇಳಲಾಗಿತ್ತು. ಅದರಂತೆ ಈಗಾಗಲೇ ೩ ದಿವಸಗಳ ಚಿತ್ರೀಕರಣದಲ್ಲಿ ನಟ ದರ್ಶನ್ ಅಭಿನಯಿಸಿದ್ದು ಸಾಹಸ ಸನ್ನಿವೇಶಗಳು ಕ್ಯಾಮರ ತುಂಬಿಕೊಂಡಿದೆ. ದರ್ಶನ್ ಈ ಹಿಂದೆ ಕೆಲವು ಚಿತ್ರಗಳಲ್ಲಿ ಅತಿಥಿ ನಟರಾಗಿ ಅವರದೇ ನಿರ್ಮಾಣದ ’ಜೊತೆ ಜೊತೆಯಲಿ’ ಹಾಗೂ ’ಅರಸು’ ಚಿತ್ರಗಳಲ್ಲಿ ಕೆಲವು ವರ್ಷಗಳ ಹಿಂದೆ ನಟಿಸಿದ್ದರು.
’ಮೇಸ್ತ್ರಿ’ ಚಿತ್ರಕ್ಕೆ ಚಿತ್ರೀಕರಣ ಬೆಂಗಳೂರಿನ ರಾಜರಾಜೇಶ್ವರಿ ನಗರ, ಬಂಗಾರಪ್ಪ ಸ್ಲಂ, ವಿಶ್ವವಿದ್ಯಾಲಯ, ನಂಜನಗೂಡು, ವೇಣುಗೋಪಾಲ ಸ್ವಾಮಿ ಬೆಟ್ಟ, ಸಕಲೇಶಪುರ, ಮಂಗಳೂರು ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎನ್ನುತ್ತಾರೆ ನಟ ಹಾಗೂ ನಿರ್ಮಾಪಕ ಬಾಲು.
’ಅನು’ ಚಿತ್ರದ ಬಳಿಕ ಪೂರ್ಣ ಪ್ರಮಾಣದ ನಾಯಕನಾಗಿರುವ ಬಾಲು ಕಷ್ಟಪಟ್ಟು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಇಡೀ ಚಿತ್ರತಂಡ ಮಾತನಾಡುತ್ತಿದೆ.
ನಂದಾ ಲವ್ಸ ನಂದಿತಾ ಚಿತ್ರಕ್ಕೆ ಜಿಂಕೆಮರಿ ಹಾಡನ್ನು ಬರೆದ ರಾಜಕಿರಣ್ ಈ ಚಿತ್ರದ ನಿರ್ದೇಶಕರು. ಇಂದಿನ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿರುವುದನ್ನು ಅವರು ತಿಳಿಸುತ್ತಿದ್ದಾರೆ. ಹರೀಶ್ ಶೃಂಗ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ನಿರಂಜನ ಬಾಬು ಚಿತ್ರದ ಛಾಯಾಗ್ರಾಹಕರು.
’ಮೇಸ್ತ್ರಿ’ ಚಿತ್ರದ ತಾರಾಗಣದಲ್ಲಿ ಬಾಲು, ರಾಣಿ ಮುಖ್ಯ ಪಾತ್ರದಲ್ಲಿದ್ದಾರೆ. ಮಲೆಯಾಳಂ ಚಿತ್ರದ ಖಳ ನಟ ಚಂಬನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed